ಕುಲ

ಕುಲವು ಕುಲವು ಕುಲವು ಎಂದು ಹಾರುತಿರುವೆಯಾ?
ಸುಳ್ಳೆ ಸುಳ್ಳೆ ವೇಷಗಳನು ತೋರುತಿರುವೆಯಾ?
ಎಲ್ಲಿ ಬಂತು ಕುಲವು ತನ್ನ ರೂಪವಾವುದು?
ಓಳ್ಳೆ ಮನಸು ಇಲ್ಲದಿರಲು ಕುಲವು ಕಾಯದು

ಮಡಿಯನುಟ್ಟು ವ್ರತವ ಮಾಡಿ ಪೂಜೆಗೈದೊಡೆ
ಬಿಡುವುದೇನು ದುರಿತ ಧರ್ಮನಿಯಮವಿರದೊಡೆ?
ಸ್ಮರಿಸು ನಿನ್ನ ಹುಟ್ಟನೊಮ್ಮೆ ಶೀಲವಂತನೆ
ನೆನೆಯೊ ನವ ದ್ವಾರಳನು ನೇಮವಂತನೆ

ಸಗ್ಗ ನರಕವೆರಡು ನಿನ್ನ ಒಳಗೆ ಕಾದಿರೆ
ಹಿಗ್ಗಿ ಪಯಣ ಬೆಳಸುವೆಯಾ ಭಳಿರೆ ಭಾಪ್ಪುರೆ!
ಶಿವನ ಕುಲವು ಒಂದೇ ಇರಲು ಬೇರೆ ಕುಲಗಳೇ
ಅವನಿಯೊಳಗೆ ಬಂದ ನಾವು ಶಿವನ ಮಕ್ಕಳೇ

ಒಂದೆ ಬುವಿಯು ಒಂದೆ ಬಾನು ಒಂದೆ ಗಂಗೆಯು
ಒಂದೆ ಸೂರ್ಯ ಒಂದೆ ಚಂದ್ರ ಒಂದೆ ಆತ್ಮವು
ಒಂದೆ ಸೃಷ್ಟಿ ಒಂದೆ ಧರ್ಮ ಒಂದೆ ಮತವಿದು
ಒಂದೆ ಬ್ರಹ್ಮ ಒಂದೆ ಜ್ಞಾನ ಒಂದೆ ಬೆಳಸಿದು

ತೆರೆದು ನೋಡು ನಿನ್ನ ಕಣ್ಣ, ದ್ವೈತವೆಲ್ಲಿದೆ?
ಬರಿಯ ಮಾತು ಅಲ್ಲ, ಮನುಜ, ಸತ್ಯವಿಲ್ಲಿದೆ!
ಮನವ ಬಿಚ್ಚಿ ಮರ್ಮವರಿತು ನಕ್ಕುನಲಿದರೆ
ಜನಕಜೆಗೆ ಹಿತವು, ಅಣ್ಣ, ತನ್ನ ತಿಳಿದರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು…
Next post ಕತೆಗಾರರು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys